ಕಾಡಸಿದ್ಧೇಶ್ವರ |
74 ಇಂತಪ್ಪ ರುದ್ರಾಕ್ಷಿಯನು ಅಂತರಂಗ ಬಹಿರಂಗದಲ್ಲಿ ಧರಿಸಿ ಆಚರಿಸಲರಿಯದೆ ಬಹಿರಂಗದಲ್ಲಿ ಕ್ರೀಯವಿಟ್ಟು ಹಸ್ತ, ತೋಳು, ಕಂಠ, ಕರ್ಣ, ಉತ್ತಮಾಂಗ, ಶಿಖೆ, ಕಕ್ಷೆಯಲ್ಲಿ ಧರಿಸಿದವರಿಗೆ ಪುಣ್ಯಫಲಪ್ರಾಪ್ತಿಯಾಗುವುದಲ್ಲದೆ ಭವ ಹಿಂಗದು ನೋಡಾ. ಇಂತಪ್ಪ ಮೂಢಾತ್ಮರು ರುದ್ರಾಕ್ಷಿಯನು ಧರಿಸಿದ ಆಚಾರವೆಂತೆಂದಡೆ: ಔಡಲಗಿಡಕ್ಕೆ ಔಡಲಗೊನಿ ಬಿಟ್ಟಂತಾಯಿತು ನೋಡಾ. ಇಂತಪ್ಪ ನಿರ್ಣಯವನು ಸುe್ಞನಿ ಶರಣನು ತನ್ನ ಪರಮe್ಞನದಿಂದ ವಿಸರ್ಜಿಸಿ, ಹಿಂದೆ ಹೇಳಿದ ವಚನದ ನಿರ್ಣಯವನು ತಿಳಿದು, ತನ್ನ ಸರ್ವಾಂಗದಲ್ಲಿ ರುದ್ರಾಕ್ಷಿಯ ಧರಿಸಿ ಚಿದ್ಘನಲಿಂಗದಲ್ಲಿ ನಿರ್ವಯಲಾದನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗನಿರ್ಮಾಯಪ್ರಭುವೆ. |