ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ |
1239 ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. |
ಸಂಗೀತ ನಿರ್ದೇಶಕರು | : | ಕೆ.ಪಿ. ಉಪಾಧ್ಯಾಯ |
ಹಾಡಿದವರ ಹೆಸರು | : | ಮೈಸೂರು ರಂಗಸ್ವಾಮಿ |
ರಾಗ | : | ಪಹಾಡಿ |
ತಾಳ | : | ದಾದರಾ |
ಶೈಲಿ | : | ಹಿಂದೂಸ್ತಾನಿ |
ಸ್ಟುಡಿಯೋ | : | ಅರವಿಂದ್ |
ವಾದ್ಯ ಗೋಷ್ಠಿ ವಿವರ | : |
ಬಾನ್ಸುರಿ - ಸಮೀರ ಎಲ್.ರಾವ್
ಕೀ ಬೋರ್ಡ್ - ಪ್ರಸನ್ನ
ಮ್ಯಾಂಡೊಲಿನ್ - ವಿಶ್ವನಾಥ್
ತಬಲ - ಶಶಿಭೂೀಷಣ್ ಗುರ್ಜರ್.
|
ನಿರ್ಗಮನ |