ಚೆನ್ನಬಸವಣ್ಣ |
1035ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ. |
ಸಂಗೀತ ನಿರ್ದೇಶಕರು | : | ವಿನಾಯಕ ತೊರವಿ |
ಹಾಡಿದವರ ಹೆಸರು | : | ಅಮೃತಾ ದೇಶ್ ಪಾಂಡೆ |
ರಾಗ | : | ಮೇಘ ಮಧ್ಯಮ |
ತಾಳ | : | ದೀಪ್ಚಂದಿ |
ಶೈಲಿ | : | ಹಿಂದೂಸ್ತಾನಿ |
ಸ್ಟುಡಿಯೋ | : | ಗಣೇಶ್ ಆಡಿಯೋ ಆರ್ಟ್ |
ವಾದ್ಯ ಗೋಷ್ಠಿ ವಿವರ | : |
ಹಾರ್ಮೋನಿಯಂ - ಕೀರ್ತಿಕುಮಾರ್ ಬಡಕೇಷಿ
ಕೊಳಲು - ರಾಜೇಶ್ ಕೆ.ಎಸ್
ತಬಲ - ಗುರುಮೂರ್ತಿ ವೈದ್ಯ
ಸಿತಾರ್ - ಶ್ರೀನಿವಾಸ್ ಹೆಚ್.ಪಿ.
|
ನಿರ್ಗಮನ |